ಈ ಬಗ್ಗೆ ಸ್ಥಳೀಯ ರಾಜಕೀಯ ಮುಂದಾಳುಗಳು, ರಾಜ್ಯದ ಹಿತಚಿಂತಕರು, ಸಂಘಸಂಸ್ಥೆಗಳು ಗಟ್ಟಿಯಾಗಿ ಧ್ವನಿ ಎತ್ತಬೇಕಿದೆ. ಯಾವ ಕಾರಣಕ್ಕೂ ಬಂಡೀಪುರದಲ್ಲಿ ಮೇಲು ಸೇತುವೆ ಆಗಲು ಬಿಡಬಾರದು. ಕರ್ನಾಟಕದ ಮುಖ್ಯಮಂತ್ರಿ ಈ ಕುರಿತು ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದ್ದಾರೆ. ಅವರ ನಿಲುವು ಕೊನೆಯವರೆಗೂ ಇದೇ ಆಗಿರಲಿ. ಬಂಡೀಪುರದ ಹಿತರಕ್ಷಣೆಯ ಮೂಲಕ ನಮ್ಮ ರಾಜ್ಯದ ಹಿತವನ್ನು ಜತನದಿಂದ ಕಾಪಾಡಲಿ. ಬಂಡೀಪುರ ಅರಣ್ಯ ಮತ್ತು ಹುಲಿಧಾಮ ನಮ್ಮ ರಾಜ್ಯದ ಸ್ವಾಭಾವಿಕ ಹಕ್ಕು. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ.