<p class="Briefhead">ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಖಾತೆಯಲ್ಲಿ ವರ್ಷದೊಳಗೆ ಕನಿಷ್ಠ ₹ 3 ಸಾವಿರ ಕೋಟಿ ಹಣ ಇರುವಂತೆ ಕೆಲಸ ನಿರ್ವಹಿಸುವುದಾಗಿ ಪ್ರಾಧಿಕಾರದ ನೂತನ ಅಧ್ಯಕ್ಷರು ಹೇಳಿರುವುದನ್ನು ಓದಿ (ಪ್ರ.ವಾ., ನ. 27) ಸಂತೋಷವಾಯಿತು.ಒಂದು ಕಾಲದಲ್ಲಿ ಅತ್ಯಂತನಂಬಿಕೆ ಹಾಗೂ ದಕ್ಷತೆಗೆ ಹೆಸರಾಗಿದ್ದ ಬಿಡಿಎ, ಕಾಲಕ್ರಮೇಣ ಭ್ರಷ್ಟಾಚಾರದ ಗೂಡು ಎಂಬ ಕಳಂಕವನ್ನು ಹೊತ್ತುಕೊಂಡಿತು.</p>.<p class="Briefhead">ಹಲವರ ಸ್ವಂತ ಸೂರಿನ ಕನಸನ್ನು ತಕ್ಕಮಟ್ಟಿಗೆ ಈಡೇರಿಸುತ್ತಿದ್ದ ಸಂಸ್ಥೆ, ನಂತರದದಿನಗಳಲ್ಲಿ ಬಹುಪಾಲು ಬೆಂಗಳೂರಿಗರ ಕನಸನ್ನು ಕನಸಿಗೇ ಸೀಮಿತಗೊಳಿಸಿತು. ಖಾಸಗಿಯವರು ನಿರ್ಮಿಸುವ ಅನಧಿಕೃತಬಡಾವಣೆಗಳಲ್ಲಿ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಪ್ರಯತ್ನಕ್ಕೆ ಪರೋಕ್ಷವಾಗಿ ಪುಷ್ಟಿ ನೀಡಿತು. ಇದರಿಂದಎಷ್ಟೋ ಜನ ತಮ್ಮ ಜೀವಮಾನದ ಗಳಿಕೆಯಹಣವನ್ನುಕಳೆದುಕೊಂಡದ್ದೂ ಉಂಟು.</p>.<p>ಇನ್ನೊಂದೆಡೆ, ಮೂಲೆ ನಿವೇಶನದ ಹೆಸರಿನಲ್ಲಿ ಹರಾಜು ಪ್ರಕ್ರಿಯೆಗೆಹೆಚ್ಚು ಒತ್ತು ಕೊಟ್ಟು, ಈ ಪ್ರಾಧಿಕಾರವನ್ನು ಜನಸಾಮಾನ್ಯರಿಗೆ ಕೈಗೆಟುಕದ ಗಗನಕುಸುಮಎನ್ನುವಂತೆ ಮಾಡಲಾಯಿತು. ಬಿಡಿಎ ಇನ್ನಾದರೂ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚುಒತ್ತು ಕೊಟ್ಟು, ತನ್ನ ಹೆಸರಿಗೆತಕ್ಕ ಹಾಗೆ ನಡೆದುಕೊಳ್ಳುವಂತೆ ಆಗಲೆಂದು ಆಶಿಸೋಣ.<br />–<em><strong>ಕಡೂರುಫಣಿಶಂಕರ್,<span class="Designate">ಬೆಂಗಳೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಖಾತೆಯಲ್ಲಿ ವರ್ಷದೊಳಗೆ ಕನಿಷ್ಠ ₹ 3 ಸಾವಿರ ಕೋಟಿ ಹಣ ಇರುವಂತೆ ಕೆಲಸ ನಿರ್ವಹಿಸುವುದಾಗಿ ಪ್ರಾಧಿಕಾರದ ನೂತನ ಅಧ್ಯಕ್ಷರು ಹೇಳಿರುವುದನ್ನು ಓದಿ (ಪ್ರ.ವಾ., ನ. 27) ಸಂತೋಷವಾಯಿತು.ಒಂದು ಕಾಲದಲ್ಲಿ ಅತ್ಯಂತನಂಬಿಕೆ ಹಾಗೂ ದಕ್ಷತೆಗೆ ಹೆಸರಾಗಿದ್ದ ಬಿಡಿಎ, ಕಾಲಕ್ರಮೇಣ ಭ್ರಷ್ಟಾಚಾರದ ಗೂಡು ಎಂಬ ಕಳಂಕವನ್ನು ಹೊತ್ತುಕೊಂಡಿತು.</p>.<p class="Briefhead">ಹಲವರ ಸ್ವಂತ ಸೂರಿನ ಕನಸನ್ನು ತಕ್ಕಮಟ್ಟಿಗೆ ಈಡೇರಿಸುತ್ತಿದ್ದ ಸಂಸ್ಥೆ, ನಂತರದದಿನಗಳಲ್ಲಿ ಬಹುಪಾಲು ಬೆಂಗಳೂರಿಗರ ಕನಸನ್ನು ಕನಸಿಗೇ ಸೀಮಿತಗೊಳಿಸಿತು. ಖಾಸಗಿಯವರು ನಿರ್ಮಿಸುವ ಅನಧಿಕೃತಬಡಾವಣೆಗಳಲ್ಲಿ ತಮ್ಮ ಕನಸನ್ನು ನನಸಾಗಿಸಿಕೊಳ್ಳುವ ಪ್ರಯತ್ನಕ್ಕೆ ಪರೋಕ್ಷವಾಗಿ ಪುಷ್ಟಿ ನೀಡಿತು. ಇದರಿಂದಎಷ್ಟೋ ಜನ ತಮ್ಮ ಜೀವಮಾನದ ಗಳಿಕೆಯಹಣವನ್ನುಕಳೆದುಕೊಂಡದ್ದೂ ಉಂಟು.</p>.<p>ಇನ್ನೊಂದೆಡೆ, ಮೂಲೆ ನಿವೇಶನದ ಹೆಸರಿನಲ್ಲಿ ಹರಾಜು ಪ್ರಕ್ರಿಯೆಗೆಹೆಚ್ಚು ಒತ್ತು ಕೊಟ್ಟು, ಈ ಪ್ರಾಧಿಕಾರವನ್ನು ಜನಸಾಮಾನ್ಯರಿಗೆ ಕೈಗೆಟುಕದ ಗಗನಕುಸುಮಎನ್ನುವಂತೆ ಮಾಡಲಾಯಿತು. ಬಿಡಿಎ ಇನ್ನಾದರೂ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚುಒತ್ತು ಕೊಟ್ಟು, ತನ್ನ ಹೆಸರಿಗೆತಕ್ಕ ಹಾಗೆ ನಡೆದುಕೊಳ್ಳುವಂತೆ ಆಗಲೆಂದು ಆಶಿಸೋಣ.<br />–<em><strong>ಕಡೂರುಫಣಿಶಂಕರ್,<span class="Designate">ಬೆಂಗಳೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>