ಅಲ್ಲದೇ ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಸಮವಸ್ತ್ರ, ಶೂ, ವಿದ್ಯಾರ್ಥಿ ವೇತನ ಹಾಗೂ ಇನ್ನಿತರ ಯೋಜನೆಗಳಲ್ಲಿ ಹಣ ಪೋಲಾಗುವುದು ತಪ್ಪುತ್ತದೆ. ಅರ್ಹ ವಿದ್ಯಾರ್ಥಿಗಳಷ್ಟೇ ಫಲಾನುಭವಿಗಳಾಗುವುದರಿಂದ ಸರ್ಕಾರಕ್ಕೆ ಅಪಾರ ಹಣ ಉಳಿತಾಯವಾಗಲಿದೆ. ಸಮಯ ಪಾಲನೆ ಅನಿವಾರ್ಯ ಆಗಲಿದೆ. ಶಿಕ್ಷಕರ ಗೈರುಹಾಜರಿಗೂ ಕಡಿವಾಣ ಬೀಳಲಿದೆ. ಶಿಕ್ಷಣ ಇಲಾಖೆಯ ಕಾರ್ಯದಕ್ಷತೆ ಹೆಚ್ಚಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಲಿದೆ.