ರಾಜ್ಯ ಸರ್ಕಾರವು ಕೋವಿಡ್ನಿಂದಾದ ಆರ್ಥಿಕ ಸ್ಥಿತಿಗತಿಯ ಕಾರಣ ನೀಡಿ, 2020-21ನೇ ಸಾಲಿನ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳು, ಬ್ಯಾಕ್ಲಾಗ್, ನೇರ ನೇಮಕಾತಿ ಮತ್ತು ಈಗಾಗಲೇ ಆರ್ಥಿಕ ಇಲಾಖೆಯ ಅನುಮತಿ ಪಡೆದ ನೇಮಕಾತಿಯ ವಿವಿಧ ಹಂತಗಳಲ್ಲಿರುವ ಹುದ್ದೆಗಳನ್ನು ಮುಂದಿನ ಆದೇಶದವರೆಗೆ ತಡೆಹಿಡಿದಿರುವುದಾಗಿ ತಿಳಿಸಿದೆ. ಇದರಿಂದ, ಉದ್ಯೋಗ ಅರಸುತ್ತಿರುವ ಎಷ್ಟೋ ಆಕಾಂಕ್ಷಿಗಳ ಭವಿಷ್ಯವು ಅತಂತ್ರವಾಗಿದೆ. ಒದಗಿರುವ ಕಷ್ಟಗಳಿಗೆಲ್ಲ ಕೊರೊನಾವೇ ಕಾರಣ ಎಂದು ಸರ್ಕಾರ ಭಾವಿಸಿದಂತಿದೆ.