ಈಗ ಸಚಿವರು ಸೂಚಿಸಿರುವಂತೆ ಶಿಸ್ತು ಕ್ರಮ ಜರುಗಿಸಿದಾಗ ಮಾತ್ರ ನಮ್ಮ ನೆಲ, ಜಲ, ಭಾಷೆಯ ಸ್ವಂತಿಕೆ ಉಜ್ವಲವಾಗುತ್ತದೆ. ಈ ಆದೇಶ ಬರೀ ಕಾಗದದ ರೂಪದಲ್ಲಿ ಉಳಿಯದೆ, ಅದರ ಮೂಲ ಉದ್ದೇಶ ಈಡೇರುವವರೆಗೆ ಸಂಬಂಧಿಸಿದ ಎಲ್ಲರೂ ಶ್ರಮಿಸಬೇಕು. ಕನ್ನಡದ ಬಗ್ಗೆ ಇಲ್ಲಿಯವರೆಗೆ ತೋರಿರುವ ನಿರ್ಲಕ್ಷ್ಯ ಸಾಕು. ಈಗಲಾದರೂ ಕನ್ನಡದ ಅಸ್ಮಿತೆ ಉಳಿಸಲು ಶ್ರಮಿಸೋಣ.
–ಚಾಂದ್ ಬಾಷ, ಅರಸೀಕೆರೆ