ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮುಖ್ಯವಾಗಿ ಮೂರು ವರ್ಗಗಳನ್ನು ಖುಷಿಪಡಿಸುವ ಗುರಿ ಹೊಂದಿದೆ. ರೈತರು, ಅಸಂಘಟಿತ ವಲಯದ ಕಾರ್ಮಿಕರು ಮತ್ತು ಆದಾಯ ಕರ ಪಾವತಿಸುವವರು. ಇವರೆಲ್ಲ ಮತ ಮಾರ್ಗ ದಲ್ಲಿ ಬರುವವರು. ಚುನಾವಣೆ ಫಲಿತಾಂಶ ನಿರ್ಧರಿಸುವಲ್ಲಿ ಈ ಮಧ್ಯಮ ವರ್ಗದವರ ಪಾತ್ರ ನಿರ್ಣಾಯಕ ಆಗಿರುವುದರಿಂದ ಕೊನೆಯ ಬಜೆಟ್ನಲ್ಲಾದರೂ ಅವರಿಗೆ ಭರಪೂರ ಕೊಡುಗೆ ನೀಡುವುದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು.