'ಫಟಾಫಟ್’ ವಿಭಾಗದಲ್ಲಿ ಇಬ್ಬರು ಮುಖಂಡರು ಟಿಪ್ಪು ಜಯಂತಿ ಬಗ್ಗೆ ಮಾತನಾಡಿದ್ದಾರೆ (ಪ್ರ.ವಾ., ನ. 10). ಭಾರತ ರಾಷ್ಟ್ರವು ‘ಜಾತಿ, ಮತ, ಪಂಥ ನಿರಪೇಕ್ಷ ಪ್ರಜಾಪ್ರಭುತ್ವ’ ತತ್ತ್ವವನ್ನು ಆಧರಿಸಿದೆ. ಸ್ವಾತಂತ್ರ್ಯಪೂರ್ವ ಕಾಲವನ್ನು ಬಿಟ್ಟು ನಂತರದ ಸರ್ಕಾರದ ಆಡಳಿತ ಸಿದ್ಧಾಂತವನ್ನು ಪಾಲಿಸುವುದು ಮುಖ್ಯ. ಆದರೆ ವೈದಿಕ ಮತಕ್ಕೆ ಸರ್ಕಾರ ಪ್ರಾಶಸ್ತ್ಯ, ಆದ್ಯತೆ ಕೊಟ್ಟುಕೊಂಡೇ ಬಂದಿದೆ. ನಮ್ಮ ರಾಷ್ಟ್ರವು ನೇರವಾಗಿ ಸರ್ಕಾರಿ ಆಡಳಿತ ಯಂತ್ರ ಬಳಸಿ ಆಚರಿಸಬೇಕಾದುದು ಎರಡು ಆಚರಣೆಗಳನ್ನು. 1. ರಿಪಬ್ಲಿಕ್ ದಿನಾಚರಣೆ. 2. ಸ್ವಾತಂತ್ರ್ಯ ದಿನಾಚರಣೆ. ‘ರಾಷ್ಟ್ರಪಿತ’ ಎಂದು ಗಾಂಧೀಜಿ ಜಯಂತಿಯ ಆಚರಣೆಯು ಒಂದು ವಿಶೇಷ.