ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಗ್ಗಿರಿ ಎಂದರೆ ತೆವಳುವವರು!

Last Updated 19 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

‘ಬಹುತ್ವಕ್ಕೆ ಮಾರಕವಾಗುತ್ತಿದೆ ಆಕಾಶವಾಣಿ’ ಎಂಬ ಡಾ. ಬಸವರಾಜ ಸಾದರ ಅವರ ಲೇಖನದಲ್ಲಿ (ಪ್ರ.ವಾ., ಏ. 17) ಉತ್ಪ್ರೇಕ್ಷೆಯೇನೂ ಇಲ್ಲ. ಆಕಾಶವಾಣಿಯಲ್ಲಿ ಪ್ರಸಾರವಾಗುವ ವಾರ್ತೆಗಳು ಕೂಡ ಆಳುವ ಪಕ್ಷದ ತುತ್ತೂರಿ ಊದುವುದಕ್ಕಷ್ಟೇ ಸೀಮಿತವಾಗಿವೆ. ರಾಜ್ಯದ ವಾರ್ತೆಗಳಿಗೆ ಆದ್ಯತೆ ಇರಬೇಕಾದ ‘ಪ್ರದೇಶ ಸಮಾಚಾರ’ದಲ್ಲಿ ಅರ್ಧಕ್ಕಿಂತ ಹೆಚ್ಚಿನ ಸಮಯ ಬಿಜೆಪಿಯ ಕೇಂದ್ರ ನಾಯಕರ ಹೇಳಿಕೆಗಳಿಗೆ ಮೀಸಲಾಗುತ್ತಿದೆ. ಜನ ಹಿತಾಸಕ್ತಿಯ ಸುದ್ದಿಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.

ರೇನ್‌ಬೊ ಚಾನೆಲ್ಲಿನಲ್ಲಿ ಎರಡು ನಿಮಿಷ ಪ್ರಸಾರವಾಗುವ ಸುದ್ದಿಸಾರದ್ದೂ ಇದೇ ಕಥೆ. ತಿಂಗಳ ಮೂರನೇ ವಾರಶುರುವಾಗುತ್ತಿದ್ದಂತೆ ಪ್ರತೀ ಗಂಟೆಯ ಸುದ್ದಿಯಲ್ಲೂ ‘ಮನ್ ಕಿ ಬಾತ್’ನ ಪ್ರೋಮೊವನ್ನು ಹೇವರಿಕೆ ಹುಟ್ಟುವಷ್ಟು ಸಲ ಪ್ರಸಾರ ಮಾಡುತ್ತಾರೆ. ಆಳುವವರು ‘ಬಗ್ಗಿರಿ’ ಎಂದರೆ ತೆವಳುವ ಸ್ಥಿತಿಗೆ ಬಂದು ನಿಂತಿದೆ ಇಂದಿನ ಆಕಾಶವಾಣಿ.

- ಶ್ರೀಧರ ಬಿ.ಎಲ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT