‘ಬಹುತ್ವಕ್ಕೆ ಮಾರಕವಾಗುತ್ತಿದೆ ಆಕಾಶವಾಣಿ’ ಎಂಬ ಡಾ. ಬಸವರಾಜ ಸಾದರ ಅವರ ಲೇಖನದಲ್ಲಿ (ಪ್ರ.ವಾ., ಏ. 17) ಉತ್ಪ್ರೇಕ್ಷೆಯೇನೂ ಇಲ್ಲ. ಆಕಾಶವಾಣಿಯಲ್ಲಿ ಪ್ರಸಾರವಾಗುವ ವಾರ್ತೆಗಳು ಕೂಡ ಆಳುವ ಪಕ್ಷದ ತುತ್ತೂರಿ ಊದುವುದಕ್ಕಷ್ಟೇ ಸೀಮಿತವಾಗಿವೆ. ರಾಜ್ಯದ ವಾರ್ತೆಗಳಿಗೆ ಆದ್ಯತೆ ಇರಬೇಕಾದ ‘ಪ್ರದೇಶ ಸಮಾಚಾರ’ದಲ್ಲಿ ಅರ್ಧಕ್ಕಿಂತ ಹೆಚ್ಚಿನ ಸಮಯ ಬಿಜೆಪಿಯ ಕೇಂದ್ರ ನಾಯಕರ ಹೇಳಿಕೆಗಳಿಗೆ ಮೀಸಲಾಗುತ್ತಿದೆ. ಜನ ಹಿತಾಸಕ್ತಿಯ ಸುದ್ದಿಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.