ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ವಿಧಾನಸೌಧದಲ್ಲಿ ನಡೆದ ಸಮಾರಂಭವೊಂದರಲ್ಲಿ ಹಾರ, ಪೇಟ, ಶಾಲು ಸ್ವೀಕರಿಸಿ ಸನ್ಮಾನಿತರಾಗುವುದರೊಂದಿಗೆ ತಮ್ಮ ಆದೇಶವನ್ನು ತಾವೇ ಉಲ್ಲಂಘಿಸಿದಂತಾಗಿದೆ.
ಮುಖ್ಯಮಂತ್ರಿಯಾದ ಹೊಸತರಲ್ಲಿ ಝೀರೊ ಟ್ರಾಫಿಕ್ ಬಗ್ಗೆ, ಹಾರ– ತುರಾಯಿ ಬಗ್ಗೆ, ಗೌರವ ವಂದನೆ ಬಗ್ಗೆ ಅವರು ತೆಗೆದುಕೊಂಡ ತೀರ್ಮಾನಗಳು ಜನರಲ್ಲಿ ಆಶಾಭಾವ ಮೂಡಿಸುವಂತಿದ್ದವು. ಆದರೆ ಈಗ ಆ ಭಾವನೆಗೆ ಅವರೇ ಧಕ್ಕೆ ತಂದಿದ್ದಾರೆ! ಅವರ ಸಂಪುಟದ ಸಚಿವರಿಗೂ ಆದೇಶ ಉಲ್ಲಂಘನೆಗೆ ದಾರಿ ಮಾಡಿ ಕೊಟ್ಟಂತಾಗಿದೆ.