‘ಕಾಂಗ್ರೆಸ್ನವರು ಪ್ರಶ್ನಿಸಬೇಕಿರುವುದು...’ ಎಂಬ ಗುರುದೇವ ಭಂಡಾರ್ಕರ್ ಅವರ ಪತ್ರ (ವಾ.ವಾ., ಮೇ 17) ಅತ್ಯಂತ ಮಾರ್ಮಿಕ ವ್ಯಂಗ್ಯವೇ ಸರಿ. ಕೊಟ್ಟ ವಾಗ್ದಾನದಂತೆ ನಡೆದುಕೊಳ್ಳಲು ರಾಜಕಾರಣಿಗಳೇನು ದೇವತೆಗಳೇ? ಅಂದಮೇಲೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರ ಮಾತೇನು? ಇದು ಮತದಾರ ಪ್ರಭು ‘ಗುರುದೇವರು’ಗಳಿಗೂ ಗೊತ್ತು. ಆದರೂ ನಡೆಯುತ್ತಿದೆ ‘ಪ್ರಜಾತಂತ್ರ’ವೆಂಬ ಈ ಬೀದಿನಾಟಕ ಅನುದಿನವೂ ಅನುಕ್ಷಣವೂ! ನಾವು ವೋಟು ಹಾಕಲು ಇಷ್ಟಾದರೂ ಮನರಂಜನೆ ಬೇಡವೇ? ಇಷ್ಟಕ್ಕೂ ಈ ರಾಜಕಾರಣಿಗಳು ಕೊಟ್ಟ ವಾಗ್ದಾನಗಳೆಲ್ಲ ನಿಜವಾಗುವುದಾದರೆ ‘ಭುವಿಯೆ ಅರಳದೆ ದಿವವಾಗಿ’!