ಸರ್ಕಾರ ರಚನೆಗೆ ಬೇಕಾಗುವಷ್ಟು ಬಹುಮತ ತಮಗೆ ದೊರೆಯದಿದ್ದಾಗ, ದೇವೇಗೌಡರ ಮನೆಯವರೆಗೂ ಹೋಗಿ ಜೆಡಿಎಸ್ಗೆ ಬೇಷರತ್ ಬೆಂಬಲ ಸೂಚಿಸಿದವರು ಇವರೇ ಅಲ್ಲವೇ? ತಮ್ಮ ಆಳ್ವಿಕೆಯಲ್ಲಿ ಜನಪರವಾದ ಎಷ್ಟೇ ಯೋಜನೆಗಳನ್ನು ರೂಪಿಸಿದ್ದರೂ ಅವು ಬಹುಮತ ಪಡೆಯಲು ಸಾಕಾಗಲಿಲ್ಲವಲ್ಲ? ಅವರ ಲೆಕ್ಕಾಚಾರ ಎಲ್ಲಿಯೊ ತಪ್ಪಿ ಹೋಯಿತು, ಆ ಮಾತಿರಲಿ.