ಇಳಕಲ್ನ ಡಾ. ಕಡಪಟ್ಟಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅನಾರೋಗ್ಯದ ನಿಮಿತ್ತ ಹೋಗಿದ್ದೆ. ಡಾ. ಮಹಾಂತೇಶ ಕಡಪಟ್ಟಿಯವರು ರೋಗಿಗಳಿಗೆ ಆಕ್ಸಿಮೀಟರ್ ಪ್ರಮಾಣವನ್ನು ದೃಢೀಕರಿಸುತ್ತಾ ಸ್ಥೈರ್ಯ ತುಂಬುತ್ತಿದ್ದರು. ಜೊತೆಗೆ ಆಸ್ಪತ್ರೆಯಲ್ಲಿ ಕೋವಿಡ್-19 ಸಮಯದಲ್ಲಿ ಉಚಿತ ಊಟದ ವ್ಯವಸ್ಥೆ ಕಂಡು ಬೆರಗಾದೆ. ನಿತ್ಯ ಹತ್ತಾರು ಹಳ್ಳಿಗಳಿಂದ ರೋಗಿಗಳು ಬರುತ್ತಾರೆ. ಈಗ ಇಳಕಲ್ನಲ್ಲಿ ಖಾನಾವಳಿಗಳು ತೆರೆದಿರುವುದಿಲ್ಲ. ಸಂಬಂಧಿಗಳಿದ್ದರೂ ಯಾರೂ ಬಂದು ಮೊದಲಿನ ದಿನಗಳಂತೆ ಊಟ ಕೊಟ್ಟು ಹೋಗುವುದಿಲ್ಲ. ಅವರಿಗೂ ಲಾಕ್ಡೌನ್, ಹಳ್ಳಿಯಿಂದ ಊಟ ತಂದು ಕೊಡಲು ವಾಹನದ ವ್ಯವಸ್ಥೆಯೂ ಇಲ್ಲ. ಹೀಗಾಗಿ ಆಸ್ಪತ್ರೆಯಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿದ್ದು, ರುಚಿ ಶುಚಿಯಾದ ಊಟ ಕೊಡುತ್ತಿದ್ದಾರೆ. ಕೊರೊನಾ ನಿಯಮಗಳನ್ನು ಪಾಲಿಸುತ್ತಾ ಊಟಕ್ಕೆ ಮಾಡಿದ್ದ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.