‘ಮುಖ್ಯ ಎಂಜಿನಿಯರ್ ಹುದ್ದೆಗೆ ₹10 ಕೋಟಿ ಕಪ್ಪ!’ (ಪ್ರ. ವಾ., ಒಳನೋಟ, ನ. 25) ವರದಿಯನ್ನು ಓದಿ ದಿಗ್ಭ್ರಾಂತನಾದೆ. ಇಷ್ಟೊಂದು ಹಣವನ್ನು ‘ಕಪ್ಪ’ವಾಗಿ ಕೊಟ್ಟು ಬಂದವರು ಎಷ್ಟು ದೋಚಬಹುದು! ಈ ಮಹಾನ್ ತಿಮಿಂಗಿಲಗಳು ಕಟ್ಟಿದ ರಸ್ತೆಗಳು ಮೂರೇ ತಿಂಗಳಲ್ಲಿ ಹಳ್ಳಬಿದ್ದು, ಅಪಘಾತ ಸಂಭವಿಸಿ ಅಮಾಯಕರ ಬಲಿ ಪಡೆಯುತ್ತವೆ. ಇವರು ನಿರ್ಮಿಸಿದ ಕಳಪೆ ಕಾಮಗಾರಿಯ ಸೇತುವೆಗಳು ಮುರಿದು ತಲೆಗಳುರುಳುತ್ತವೆ. ಇವರು ನಿರ್ಮಿಸಿದ ಶಾಲೆ, ಆಸ್ಪತ್ರೆಗಳ ಕಟ್ಟಡಗಳು ಕುಸಿದು ಮಕ್ಕಳು, ರೋಗಿಗಳು ಬಲಿಯಾಗುತ್ತಾರೆ. ಜನರ ತೆರಿಗೆಯ ಹಣವು ಹೀಗೆ ವ್ಯರ್ಥವಾಗುತ್ತದೆ. ಒಂದೊಂದು ಹುದ್ದೆಗೂ ಒಂದೊಂದು ದರ! ಪ್ರಜಾಪ್ರಭುತ್ವದ ಅಪಹಾಸ್ಯ!