ನೇಣಿಗೆ ಕೊರಳೊಡ್ಡುವ ದಿನದ ನಿರೀಕ್ಷೆಯಲ್ಲಿದ್ದ ಕೈದಿಯೊಬ್ಬನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಿ ಸುಪ್ರೀಂ ಕೋರ್ಟ್ನ ತ್ರಿಸದಸ್ಯ ಪೀಠ ತೀರ್ಪು ನೀಡಿದೆ. ಈ ಕೈದಿ ಜೈಲಿನಲ್ಲಿದ್ದಾಗ ಓದಿ ಪದವೀಧರನಾದದ್ದು, ಗಾಂಧೀಜಿ ವಿಚಾರಧಾರೆಯಲ್ಲಿ ತರಬೇತಿ ಪಡೆದದ್ದು ಮತ್ತು ವಿಶೇಷವಾಗಿ, ಈ ಅವಧಿಯಲ್ಲಿ ರಚಿಸಿದ ಕವಿತೆಗಳನ್ನು ಗಮನಿಸಿ, ಆತನ ಮನಃ ಪರಿವರ್ತನೆಯಾಗಿದೆ ಎಂದು ಕೋರ್ಟ್ ಪರಿಗಣಿಸಿದ ವರದಿಯನ್ನು ಓದಿ ಹನಿಗಣ್ಣಾದೆ.