ಪರೀಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಸೋಂಕಿತರು ತಮಗೆ ಸೋಂಕುಂಟಾಗಿರುವುದರ ಅರಿವಿಲ್ಲದೆ ಇತರರಿಗೂ ಅದನ್ನು ಹರಡುತ್ತಾರೆ. ರಾಜ್ಯ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯು ನಾಮಕಾವಾಸ್ತೆ ಎನ್ನುವ ರೀತಿಯಲ್ಲಿ ಇದೆ. ಪರೀಕ್ಷೆಗಳನ್ನು ಕಡಿಮೆ ಮಾಡುವುದರಿಂದ ಸರ್ಕಾರಕ್ಕೆ ವೆಚ್ಚವೇನೂ ಕಡಿಮೆ ಆಗುವುದಿಲ್ಲ. ಏಕೆಂದರೆ ಪರೀಕ್ಷೆ ಮಾಡಿಸದ ಕಾರಣ ಜನ ಸೋಂಕಿಗೆ ಒಳಗಾದರೆ ಸರ್ಕಾರ ಭರಿಸಬೇಕಾದ ವೆಚ್ಚ ದುಪ್ಪಟ್ಟು ಆಗುತ್ತದೆ. ಮತ್ತೊಂದೆಡೆ, ಕಳೆದುಹೋದ ಅಮೂಲ್ಯ ಜೀವಗಳಿಗೆ ಬೆಲೆ ಕಟ್ಟಲಾಗದು. ಇದನ್ನು ಆಡಳಿತಾರೂಢರು ಮನವರಿಕೆ ಮಾಡಿಕೊಳ್ಳಬೇಕು.