ಜನರಿಗೆ ಉಚಿತವಾಗಿ ಕೊಡುವ ಇತರ ಯೋಜನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಆರೋಗ್ಯ ಯೋಜನೆಯ ಭಾಗವಾಗಿ ಒಮ್ಮೆ ಎಲ್ಲರಿಗೂ ಜೀವವಿಮೆ ಮಾಡಿಸಿ, ಒಂದೆರಡು ಕಂತುಗಳನ್ನು ಸರ್ಕಾರವೇಕಟ್ಟುವಂತಾಗಬೇಕು. ಆಗಲಾದರೂ ಜನರ ಭೀತಿ ಕಡಿಮೆ ಆಗುತ್ತದೆ. ಆಸ್ಪತ್ರೆಗಳಲ್ಲಿನ ಅಧ್ವಾನ, ವಿಪರೀತ ಖರ್ಚಿನ ಕಾರಣದಿಂದ ಹೆಚ್ಚಿನವರು ಸೋಂಕಿನ ಬಗ್ಗೆ ಹೇಳಿಕೊಳ್ಳಲೂ ಹಿಂಜರಿಯುತ್ತಿದ್ದಾರೆ. ಈ ಸೂಕ್ಷ್ಮವನ್ನು ಮಾಧ್ಯಮಗಳು ಮತ್ತು ಸರ್ಕಾರ ಅರಿಯಬೇಕಾಗಿದೆ.