ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ, ದಲಿತ ನಾಯಕ ರಾಮವಿಲಾಸ್ ಪಾಸ್ವಾನ್, ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್, ದಲಿತ ನಾಯಕ ಜಿಗ್ನೇಶ್ ಮೆವಾನಿ, ದಲಿತ ನಾಯಕ ಎನ್.ಮಹೇಶ್... ಪತ್ರಿಕೆಗಳು ಹಾಗೂ ಟಿ.ವಿ. ಚಾನೆಲ್ಗಳು ಈ ನಾಯಕರ ಹೆಸರುಗಳನ್ನು ಪ್ರಸ್ತಾಪಿಸುವ ಪರಿ ಇದು. ಈ ಮುಖಂಡರ ಹೆಸರಿನ ಹಿಂದೆ ಮಾಧ್ಯಮಗಳು ‘ದಲಿತ’ ಎಂಬ ಟ್ಯಾಗ್ ಏಕೆ ಬಳಸುತ್ತವೆ ಎಂಬುದು ಅರ್ಥವಾಗುವುದಿಲ್ಲ. ದಲಿತ ಎಂಬ ಪದ ಜಾತಿಸೂಚಕವಲ್ಲ. ಆದರೂ ಆ ಪದವನ್ನು ಜಾತಿಸೂಚಕವನ್ನಾಗಿಯೇ ನೋಡಲಾಗುತ್ತಿದೆ. ಹಾಗಿದ್ದರೆ ದಲಿತೇತರ ನಾಯಕರಿಗೆ ಅವರ ಹೆಸರಿನ ಹಿಂದೆ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ಈಡಿಗ ಎಂದೆಲ್ಲ ಬಳಸಲಾಗುತ್ತದೆಯೇ?