<p>ಅಧಿಕಾರದ ಪಟ್ಟ ಉಳಿಸಿಕೊಳ್ಳುತ್ತಿರುವ ಪ್ರಯತ್ನದಲ್ಲಿ ಒಂದು ವರ್ಗ, ಪಟ್ಟಕ್ಕೇರಲು ಹವಣಿಸುತ್ತಿರುವ ಇನ್ನೊಂದು ವರ್ಗ, ಈ ಕಿತ್ತಾಟದಲ್ಲಿ ನಿಜಕ್ಕೂ ಬೇಸ್ತು ಬಿದ್ದದ್ದು ಮಾತ್ರ ಮತದಾರ ವರ್ಗ. ರಾಜ್ಯದಲ್ಲಿ ಆಡಳಿತ ಸರಿಯಾಗಿ ನಡೆಯುತ್ತಿಲ್ಲ.</p>.<p>ಇದರಿಂದ ತೊಂದರೆ ಅನುಭವಿಸಬೇಕಾಗಿರುವುದು ಸಾಮಾನ್ಯ ಜನರು. ಇದಕ್ಕೆಲ್ಲ ಯಾರು ಹೊಣೆ? ಅಧಿಕಾರದ ದುರಾಸೆಗೆ ರಾಜ್ಯದ ಅಭಿವೃದ್ಧಿಯನ್ನು ಬಲಿ ಕೊಡುತ್ತಿರುವುದು ಶೋಚನೀಯ.</p>.<p>ರೈತರ ಕಷ್ಟ, ಕಾರ್ಮಿಕರ ನೋವು, ಜನರ ಅಳಲನ್ನು ಕೇಳಲು ಅಧಿಕಾರಿಗಳಿಗೆ ಸಮಯವಿಲ್ಲ. ಅಧಿಕಾರದ ಹಂಬಲಕ್ಕಾಗಿ ಶಾಸಕರು ರೆಸಾರ್ಟ್ನಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ನಿಜಕ್ಕೂ ಕೆಸರಿನಲ್ಲಿ ನಡೆಯುವ ಆಟ ಎನ್ನುವುದಕ್ಕೆ ನಮ್ಮ ರಾಜ್ಯವೇ ಉದಾಹರಣೆಯಾಗುತ್ತಿರುವುದು ನಮ್ಮೆಲ್ಲರ ದುರ್ದೈವ.</p>.<p><em><strong>- ರಾಜೇಶ್ ದಳವಾಯಿ ಜಿಡ್ಡಿ, ಸಿದ್ಧಾಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಧಿಕಾರದ ಪಟ್ಟ ಉಳಿಸಿಕೊಳ್ಳುತ್ತಿರುವ ಪ್ರಯತ್ನದಲ್ಲಿ ಒಂದು ವರ್ಗ, ಪಟ್ಟಕ್ಕೇರಲು ಹವಣಿಸುತ್ತಿರುವ ಇನ್ನೊಂದು ವರ್ಗ, ಈ ಕಿತ್ತಾಟದಲ್ಲಿ ನಿಜಕ್ಕೂ ಬೇಸ್ತು ಬಿದ್ದದ್ದು ಮಾತ್ರ ಮತದಾರ ವರ್ಗ. ರಾಜ್ಯದಲ್ಲಿ ಆಡಳಿತ ಸರಿಯಾಗಿ ನಡೆಯುತ್ತಿಲ್ಲ.</p>.<p>ಇದರಿಂದ ತೊಂದರೆ ಅನುಭವಿಸಬೇಕಾಗಿರುವುದು ಸಾಮಾನ್ಯ ಜನರು. ಇದಕ್ಕೆಲ್ಲ ಯಾರು ಹೊಣೆ? ಅಧಿಕಾರದ ದುರಾಸೆಗೆ ರಾಜ್ಯದ ಅಭಿವೃದ್ಧಿಯನ್ನು ಬಲಿ ಕೊಡುತ್ತಿರುವುದು ಶೋಚನೀಯ.</p>.<p>ರೈತರ ಕಷ್ಟ, ಕಾರ್ಮಿಕರ ನೋವು, ಜನರ ಅಳಲನ್ನು ಕೇಳಲು ಅಧಿಕಾರಿಗಳಿಗೆ ಸಮಯವಿಲ್ಲ. ಅಧಿಕಾರದ ಹಂಬಲಕ್ಕಾಗಿ ಶಾಸಕರು ರೆಸಾರ್ಟ್ನಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ನಿಜಕ್ಕೂ ಕೆಸರಿನಲ್ಲಿ ನಡೆಯುವ ಆಟ ಎನ್ನುವುದಕ್ಕೆ ನಮ್ಮ ರಾಜ್ಯವೇ ಉದಾಹರಣೆಯಾಗುತ್ತಿರುವುದು ನಮ್ಮೆಲ್ಲರ ದುರ್ದೈವ.</p>.<p><em><strong>- ರಾಜೇಶ್ ದಳವಾಯಿ ಜಿಡ್ಡಿ, ಸಿದ್ಧಾಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>