ಈ ತಿಂಗಳ ಒಂದರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುದಗಲ್ಲ ಶಾಖೆಗೆ ಹಣ ತುಂಬಲು ಹೋಗಿದ್ದೆ. ಅಂದು ಸರತಿ ಸಾಲಿನಲ್ಲಿ ತುಂಬ ಗದ್ದಲ. ನನ್ನ ಕಾಲಿಗೆ ಶಸ್ತ್ರ ಚಿಕಿತ್ಸೆಯಾಗಿತ್ತು. ಬಹಳ ಹೊತ್ತು ನಿಲ್ಲುವುದಕ್ಕಾಗುತ್ತಿರಲಿಲ್ಲ. ಶಾಖಾ ವ್ಯವಸ್ಥಾಪಕರನ್ನು ಬೆಟ್ಟಿಯಾಗಿ ನನ್ನ ತೊಂದರೆ ಹೇಳಿಕೊಂಡೆ. ‘ನಾವೇನು ಮಾಡಕ್ಕಾಗುತ್ತದೆ. ಯಾರನ್ನಾದರು ಕರೆದುಕೊಂಡು ಬನ್ನಿ, ಇಲ್ಲದಿದ್ದರೆ ಸಾಲಿನಲ್ಲಿ ನಿಲ್ಲಿ’ ಎಂದು ಹೇಳಿದರು. ಸೌಜನ್ಯವಿಲ್ಲದೆ ಇವರ ಸಂಗಡ ವಾದ ಮಾಡಿ ಏನು ಪ್ರಯೋಜನ ಎಂದು ಎರಡೂವರೆ ತಾಸು ನಿಲ್ಲಬೇಕಾಯಿತು.