ಕೋವಿಡ್ ಜೊತೆಗೆ ಹೇಗೆ ಬದುಕಬೇಕೆಂಬುದನ್ನು ನಾವು ಕಲಿಯಬೇಕು ಎಂಬ ತಜ್ಞ ವೈದ್ಯರ ಮಾತು ನೂರಕ್ಕೆ ನೂರು ಸತ್ಯ. ಕೋವಿಡ್ನಿಂದ ನೋವು–ನಷ್ಟಗಳಿವೆ. ಆದರೆ ಲಾಕ್ಡೌನ್ ಮತ್ತು ಕರ್ಫ್ಯೂ ಬಹಳ ದಿನಗಳವರೆಗೆ ಮುಂದುವರಿದರೆ ನಾವು ಉಳಿಯುತ್ತೇವಾದರೂ ನಮ್ಮ ಬದುಕನ್ನೇ ಕಳೆದುಕೊಳ್ಳುವ ಭಯಾನಕ ಸತ್ಯದ ಸೂಚನೆ ಈಗಾಗಲೇ ನಮಗೆ ಸಿಕ್ಕಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನಮ್ಮ ಎಂದಿನ ಬದುಕಿಗೆ ತೆರೆದುಕೊಳ್ಳುವಂತೆ ಆಗಬೇಕು. ಲಾಕ್ಡೌನ್ ಸಂದರ್ಭದಲ್ಲಿ ಎಷ್ಟೋ ಬಡಜನರು ನರಕ ಅನುಭವಿಸಿದ್ದು ಎಲ್ಲರ ಅನುಭವಕ್ಕೆ ಬಂದಿದೆ. ಹೀಗಾಗಿ, ಪರಿಷತ್ತಿನ ಮತದಾರರನ್ನು ಕೋವಿಡ್ ನಿಯಮಪಾಲನೆಗೆ ಒಳಪಡಿಸಿ ಚುನಾವಣೆ ನಡೆಸುವುದು ಒಳ್ಳೆಯದು.