ರಾಜ್ಯದ ಯುವ ಪೀಳಿಗೆಯು ಮಾದಕ ವಸ್ತುವಿನ ಪಾಶಕ್ಕೆ ಸಿಲುಕುತ್ತಿದೆ ಎಂಬ ವರದಿಗಳು ಜನರಲ್ಲಿ ಆತಂಕ ಹುಟ್ಟಿಸುತ್ತಿವೆ. ಮಾದಕ ವಸ್ತುಗಳ ಬಳಕೆ ಅತ್ಯಂತ ಹಾನಿಕಾರಕ. ಇದು ಸಮಾಜಕ್ಕೆ ಅಂಟಿಕೊಂಡಿರುವ ದೊಡ್ಡ ಪಿಡುಗು. ಈ ಜಾಲ ಹೊಂದಿರುವ ಸಂಪರ್ಕವನ್ನು ಗಮನಿಸಿದರೆ, ಗುಪ್ತಚರ ಇಲಾಖೆಯು ಈ ಬಗ್ಗೆ ಇಲ್ಲಿಯವರೆಗೆ ಕಾಲಕಾಲಕ್ಕೆ ಗುಪ್ತ ವರದಿ ಪಡೆಯಲು ಪ್ರಯತ್ನಿಸಲಿಲ್ಲವೇ ಎಂಬ ಶಂಕೆ ಬರುವುದು ಸಹಜ.