ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶವನ್ನೇ ಮುಚ್ಚಿಬಿಡುವ ಶಿಕ್ಷಣ ವ್ಯಾಪಾರ

Last Updated 7 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಸಿಇಟಿ ಪರೀಕ್ಷೆಯಲ್ಲಿ ಒಳ್ಳೆಯ ರ‍್ಯಾಂಕ್‌ ಪಡೆದರೂ ಕರ್ನಾಟಕದ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ₹ 58 ಸಾವಿರದಿಂದ ₹ 60 ಸಾವಿರ! ಜೊತೆಗೆ ಕಾಲೇಜು ಶುಲ್ಕ ₹ 30 ಸಾವಿರ, ಹಾಸ್ಟೆಲ್ ಶುಲ್ಕ ₹ 80 ಸಾವಿರದಿಂದ ₹ 1 ಲಕ್ಷ! ಇದು ವರ್ಷದ ಶುಲ್ಕ.

ಇಂದು ಕರ್ನಾಟಕದ ಒಬ್ಬ ವಿದ್ಯಾರ್ಥಿ ಎಂಜಿನಿಯರಿಂಗ್ ಪದವಿ ಪಡೆಯಲು ವರ್ಷಕ್ಕೆ ಕನಿಷ್ಠ ₹ 2 ಲಕ್ಷ ವ್ಯಯಿಸಬೇಕು. ನಾಲ್ಕು ವರ್ಷಕ್ಕೆ ಲೆಕ್ಕಹಾಕಿ. ಈ ಕ್ರಮ, ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳನ್ನು ತಾಂತ್ರಿಕ ಶಿಕ್ಷಣದಿಂದ ವಂಚಿತರನ್ನಾಗಿಸುತ್ತದೆ. ಕನಿಷ್ಠ ಆ ಕುರಿತು ಯೋಚಿಸಲು ಸಹ ಆ ಮಕ್ಕಳಿಗೆ ಸಾಧ್ಯವಾಗುವುದಿಲ್ಲ.

ಇನ್ನು ವೈದ್ಯಕೀಯ ಶಿಕ್ಷಣದ ಪ್ರವೇಶವಂತೂ ಆ ವರ್ಗಗಳ ಪಾಲಿಗೆ ಅಸಾಧ್ಯ ಎಂಬಂತಾಗಿದೆ. ಸ್ಪರ್ಧೆಯ ಭಾಗವಾಗುವ ಅವಕಾಶವನ್ನೇ ಮುಚ್ಚಿಬಿಡುವ ಈ ಶಿಕ್ಷಣ ವ್ಯಾಪಾರವು ಅಸಮಾನತೆಗಿಂತಲೂ ಘೋರ ಅನ್ಯಾಯ. ಮೇಲ್ಮಧ್ಯಮ ವರ್ಗ, ಸರ್ಕಾರಿ ನೌಕರರ ಮಕ್ಕಳು, ಸಿರಿವಂತರ ಮಕ್ಕಳು ಮಾತ್ರ ಪಡೆಯಲು ಸಾಧ್ಯವಾಗುವ ಸವಲತ್ತನ್ನು ಸಾರ್ವತ್ರಿಕ ಶಿಕ್ಷಣ ಎಂದು ಹೇಗೆ ಕರೆಯಲು ಸಾಧ್ಯ?

– ಕಿರಣ್ ಗಾಜನೂರು,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT