ಹದಿನಾಲ್ಕು ತಿಂಗಳ ಕಾಲ ಒಟ್ಟಿಗೆ ಸರ್ಕಾರ ನಡೆಸಿದ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ಸರ್ಕಾರ ಉರುಳಿದ ಮೇಲೆ ಹಾವು– ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಇದರಿಂದ ಒಂದು ವರ್ಗಕ್ಕೆ ಮನರಂಜನೆ ಸಿಗಬಹುದು ಅಷ್ಟೆ. ಚುನಾವಣೆಗೆ ಮುಂಚೆ ಬದ್ಧವೈರಿಗಳಂತೆ ಕಾದಾಡಿ, ಚುನಾವಣೆಯ ನಂತರ ಒಗ್ಗೂಡಿ ಸರ್ಕಾರ ರಚಿಸಿದಾಗ, ಇದು ಹೆಚ್ಚುದಿನ ಬಾಳಿಕೆ ಬರುವುದಿಲ್ಲವೆಂಬುದು ಅಕ್ಷರ ಜ್ಞಾನವಿಲ್ಲದ ಸಾಮಾನ್ಯನಿಗೂ ಅರಿವಾಗಿತ್ತು.