ಪ್ರತಿವರ್ಷ ದ್ವಿತೀಯ ಪಿಯು ಮೌಲ್ಯಮಾಪನವು ಬೆಂಗಳೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ ಮುಂತಾದ ಕೆಲವು ಕೇಂದ್ರಗಳಲ್ಲಿ ನಿಗದಿಯಾಗಿ, ಇತರ ಜಿಲ್ಲೆಗಳ ಉಪನ್ಯಾಸಕರು ಈ ಕೇಂದ್ರಗಳಿಗೆ ಹೋಗಬೇಕಾಗುತ್ತದೆ. ತಮ್ಮ ಅನಾರೋಗ್ಯ,ದಟ್ಟ ಬಿಸಿಲು, ವೈಯಕ್ತಿಕ ಸಮಸ್ಯೆಗಳು, ಸಂಸಾರದ ತಾಪತ್ರಯಗಳನ್ನು ಬದಿಗಿರಿಸಿ ಸುಮಾರು ಎರಡು ವಾರಕ್ಕೂ ಹೆಚ್ಚು ಕಾಲ ಮೌಲ್ಯಮಾಪನ ಕಾರ್ಯವನ್ನು ಉಪನ್ಯಾಸಕರು ಚಾಚೂ ತಪ್ಪದೆ ಮಾಡಿಕೊಂಡು ಬಂದಿದ್ದಾರೆ. ಈ ವರ್ಷ ಕೊರೊನಾ ವೈರಸ್ ಸೋಂಕಿನ ಕಾರಣದಿಂದ ಪರೀಕ್ಷಾ ಮೌಲ್ಯಮಾಪನ ಕೇಂದ್ರವು ಆಯಾ ಜಿಲ್ಲೆಗಳಲ್ಲೇ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು.