ದೇಶದಲ್ಲಿ ಅನೇಕ ರಾಜಕಾರಣಿಗಳ ವಿರುದ್ಧ ಗುರುತರವಾದ ಆರೋಪಗಳಿದ್ದರೂ ಅವರೆಲ್ಲರೂ ಯಾವ ಅಳಕು, ಅಂಜಿಕೆಗಳಿಲ್ಲದೆ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ತೀರ್ಪುಗಳು ಬೇಗ ಪ್ರಕಟವಾಗಿ, ಭ್ರಷ್ಟ ರಾಜಕಾರಣಿಗಳಲ್ಲಿ ಅರ್ಧದಷ್ಟು ಜನರಿಗಾದರೂ ಶಿಕ್ಷೆ ಆಗಿದ್ದಿದ್ದರೆ ನಮ್ಮ ರಾಜಕೀಯ ಸ್ಥಿತಿ ಈ ಮಟ್ಟಕ್ಕೆ ಕುಸಿಯುತ್ತಿರಲಿಲ್ಲ. ಆರೋಪಿ ರಾಜಕಾರಣಿಗಳೆಲ್ಲರೂ ಸಂವಿಧಾನದತ್ತವಾದ ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂಬುದು ದುರದೃಷ್ಟಕರ ಸಂಗತಿ.