ರೈತರಿಗೆ ಸಲ್ಲಬೇಕಾದ ಬೆಳೆ ವಿಮೆ ಪಾವತಿಸಲು ವಿಳಂಬ ಮಾಡಿರುವುದಕ್ಕೆ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿರುವುದು (ಪ್ರ.ವಾ., ಜ. 14) ಸರಿಯಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯು 2016ರಲ್ಲಿ ಪ್ರಾರಂಭವಾಗಿದ್ದರೂ ಜಿಲ್ಲಾ ಮಟ್ಟದ ಕುಂದುಕೊರತೆಗಳ ಪರಿಹಾರ ಸಮಿತಿ ರಚನೆಯಾಗಿರುವುದು 2019ರಲ್ಲಿ. ಅಂದರೆ ಮೂರು ವರ್ಷಗಳ ನಂತರ! ಅಷ್ಟು ಸಾಲದೆಂಬಂತೆ, 189 ರೈತರ ಬ್ಯಾಂಕ್ ಖಾತೆಗಳು ನಿಷ್ಕ್ರಿಯಗೊಂಡಿರುವ ಕಾರಣ ಬೆಳೆ ವಿಮೆ ಪರಿಹಾರ ನೀಡಿಕೆ ಸಾಧ್ಯವಾಗಿಲ್ಲವಂತೆ! ಇದನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸರ್ಕಾರವೇ ತಿಳಿಸಿದೆ.