ಒಂದು ವರ್ಷದಿಂದ ರಾಜ್ಯ ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿ ನಲುಗುತ್ತಿದೆ. ಇಂತಹ ಸಂದರ್ಭದಲ್ಲಿ, ಸಾರ್ವಜನಿಕ ಹಿತಾಸಕ್ತಿಯಿಂದ ಮುಂದೆ ಆಗಬೇಕಾದ ಕಾರ್ಯಗಳ ಬಗ್ಗೆ ಚರ್ಚಿಸಿ, ಅನುಮೋದನೆ ಪಡೆದುಕೊಂಡು ಜನರ ಕಷ್ಟಗಳನ್ನು ಪರಿಹರಿಸಲು ಅಧಿವೇಶನದ ಸಂದರ್ಭವನ್ನು ಬಳಸಿಕೊಳ್ಳಬೇಕೇ ವಿನಾ ಈ ರೀತಿಯ ಮುಷ್ಟಿ ಯುದ್ಧಕ್ಕಲ್ಲ. ಅದಕ್ಕೆ ಬೇಕಾದರೆ ಬೇರೆ ಸ್ಥಳ ಇದೆ.