ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಿತರಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ (ಕೆಎಫ್ಸಿಎಸ್ಸಿ) ಗೋದಾಮುಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ಸಾವಿರಾರು ಟನ್ಗಳಷ್ಟು ಆಹಾರಧಾನ್ಯ ದೊಡ್ಡ ಪ್ರಮಾಣದಲ್ಲಿ ಹಾಳಾಗಿದ್ದರೆ, ಅದಕ್ಕೆ ಹೊಂದಾಣಿಕೆಗೆ ಅವಕಾಶ ಇರದ ಕಾನೂನು ಮತ್ತು ಕೆಳ ಹಂತದ ಅಧಿಕಾರಿಗಳ ಮೇಲೆ ಹಿರಿಯ ಅಧಿಕಾರಿಗಳು ಹೊಂದಿರುವ ಅಪನಂಬಿಕೆ ಕಾರಣ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ (ಪಿಡಿಎಸ್) ವಿತರಿಸಬೇಕಾದ ಅಕ್ಕಿ ಮತ್ತು ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಅಕ್ಕಿ ಒಂದೇ ಗೋದಾಮಿನಲ್ಲಿ ಇದ್ದರೂ ಎರಡನ್ನೂ ಪ್ರತ್ಯೇಕವಾಗಿ ಶೇಖರಣೆ ಮಾಡಿ ಇಡಲು ಆದೇಶ ಇರುತ್ತದೆ. ಬಿಸಿಯೂಟಕ್ಕೆ ಬಳಕೆ ಆಗುವ ಅಕ್ಕಿ, ಗೋಧಿ ವ್ಯವಹಾರವನ್ನು ಶಿಕ್ಷಣ ಇಲಾಖೆ ನಿರ್ವಹಣೆ ಮಾಡಿದರೆ, ಪಿಡಿಎಸ್ ಅನ್ನು ಆಹಾರ ಇಲಾಖೆ ಅಧಿಕಾರಿಗಳು ನಿರ್ವಹಿಸುತ್ತಾರೆ. ಇದರಿಂದಾಗಿ ಒಂದೇ ಗೋದಾಮಿನಲ್ಲಿ ಈ ಎರಡೂ ಯೋಜನೆಯ
ಅಕ್ಕಿ, ಗೋಧಿ ಇದ್ದರೂ ಬೇರೆ ಬೇರೆ ಕಡೆ ಇಟ್ಟು ನಿರ್ವಹಣೆ ಮಾಡುವುದು ಗೋದಾಮು ನಿರ್ವಾಹಕರಿಗೆ
ಅನಿವಾರ್ಯ.