ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಪಿಒಪಿ, ಸಿಮೆಂಟ್, ರಾಸಾಯನಿಕ ಬಣ್ಣ ಮುಂತಾದವನ್ನು ಬಳಸಿ ತಯಾರಿಸಿದ ಗಣೇಶನ ಮೂರ್ತಿಗಳನ್ನು ಪೂಜಿಸುವ ಬದಲು ಈ ಬಾರಿ ಮಣ್ಣಿನಿಂದ ಚಿಕ್ಕದಾದ ಮೂರ್ತಿಯನ್ನು ತಯಾರಿಸಿ ಅದನ್ನು ಕುಂಕುಮ, ಹೂವುಗಳಿಂದ ಅಲಂಕರಿಸಿ ಪೂಜಿಸುತ್ತಾ ಹಬ್ಬವನ್ನು ಸಂಭ್ರಮಿಸಬಹುದಲ್ಲವೇ?
ಪೂಜಿಸಿದ ಮೂರ್ತಿಯನ್ನು ಕೊನೆಯಲ್ಲಿ ಎಲ್ಲೆಂದರಲ್ಲಿ ವಿಸರ್ಜಿಸುವ ಬದಲು, ಮನೆಯ ಆವರಣದಲ್ಲೇ ವಿಸರ್ಜಿಸುವುದು ಸೂಕ್ತ. ಇದರಿಂದ ಪರಿಸರವೂ ಸ್ವಚ್ಛವಾಗಿರುತ್ತದೆ. ಈ ವಿಚಾರದಲ್ಲಿ ಪ್ರತಿಯೊಬ್ಬರೂ ಚಿಂತಿಸಿ, ಹೊಸತನವನ್ನು ಆಚರಣೆಗೆ ತರಬೇಕು.