ನಿಯಮ ಉಲ್ಲಂಘಿಸಿದವರ ಬಳಿ ಆ ತಕ್ಷಣಕ್ಕೆ ನಿಗದಿತ ದಂಡ ಪಾವತಿಸುವಷ್ಟು ಹಣ ಇಲ್ಲದಿದ್ದರೆ, ಅವರ ಬಳಿ ಎಷ್ಟಿರುತ್ತದೋ ಅಷ್ಟನ್ನು ಕಟ್ಟಿಸಿಕೊಂಡು, ಬಾಕಿ ಮೊತ್ತ ಪಾವತಿಗೆ ಸಮಯಾವಕಾಶ ನೀಡಬೇಕು. ಅದನ್ನು ಕೋರ್ಟ್, ಬೆಂಗಳೂರು ಒನ್ ಅಥವಾ ಆನ್ಲೈನ್ನಲ್ಲಿ ಪಾವತಿಸಲು ಅನುವು ಮಾಡಿಕೊಡಬೇಕು. ಇದರಿಂದ ಸಂಚಾರ ನಿಯಮ ಉಲ್ಲಂಘಿಸಿದ ತಪ್ಪಿಗೆ ದಂಡ ಪಾವತಿಸಿದಂತೆಯೂ ಆಗುತ್ತದೆ, ಸಾರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರವೂ ಕಡಿಮೆಯಾಗುತ್ತದೆ ಮತ್ತು ಸರ್ಕಾರಕ್ಕೂ ಹೆಚ್ಚಿನ ಆದಾಯ ಬರುತ್ತದೆ.