ತುಮಕೂರು ಸಿದ್ಧಗಂಗಾ ಮಠದ ಆವರಣದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ದಿವ್ಯಾ ಗೋಪಿನಾಥ್ ಅವರೊಡನೆ ಸಚಿವ ಸಾ.ರಾ.ಮಹೇಶ್ ಅವರ ಅನುಚಿತ ವರ್ತನೆಯನ್ನು ಮಾಧ್ಯಮದಲ್ಲಿ ನೋಡಿ ಬೇಸರವಾಯಿತು. ಮಹಿಳಾ ಅಧಿಕಾರಿಗಳ ಮೇಲಿನ ದಬ್ಬಾಳಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಜನಪ್ರತಿನಿಧಿಗಳು ಮಹಿಳೆಯರನ್ನು ಗೌರವದಿಂದ ಕಾಣುವ ಅಭ್ಯಾಸ ರೂಢಿಸಿಕೊಳ್ಳಲಿ. ಅಧಿಕಾರಿಗಳ ವಿರುದ್ಧ ಇಂತಹ ವರ್ತನೆ ಜನಪ್ರತಿನಿಧಿಗಳ ಗೌರವಕ್ಕೆ ತಕ್ಕುದಲ್ಲ. ಅವರು ಹೀಗೆ ನಡೆದುಕೊಳ್ಳುವುದು, ಮತದಾರರಿಗೆ ಮಾಡುವ ಅಪಮಾನವೇ ಸರಿ.