ಆಂಬುಲೆನ್ಸ್ ಚಾಲಕರು ಮನುಷ್ಯತ್ವ ಇಲ್ಲದ ರಾಕ್ಷಸರಂತೆ ನಡೆದುಕೊಂಡಿದ್ದಾರೆ. ದುಡ್ಡಿಗಾಗಿ ಸಿಂಡಿಕೇಟ್ ಮಾಡಿಕೊಂಡಿರುವ ಅವರು ಉಚಿತ ಆಂಬುಲೆನ್ಸ್ ಚಾಲಕನನ್ನು ಥಳಿಸಿ ವಾಪಸ್ ಕಳುಹಿಸಿರುವುದನ್ನು ನೋಡಿದರೆ, ಸೇವಾ ವಲಯ ಲಾಭ ಗಳಿಸುವ ಉದ್ಯಮದಂತೆ ಭಾಸವಾಗುತ್ತದೆ. ಸರ್ಕಾರ ಇನ್ನಾದರೂ ಇಂತಹ ಅಮಾನವೀಯ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಲಿ.