ಜಗತ್ತಿನಲ್ಲಿ ಅಸಮಾನತೆಯಲ್ಲಿ ಏರಿಕೆಯಾಗುತ್ತಿರುವುದರ ಕುರಿತಂತೆ ಪ್ರಸಿದ್ಧ ಸಿದ್ಧಾಂತವನ್ನು ಮಂಡಿಸಿದ್ದ ಥಾಮಸ್ ಪಿಕೆಟ್ಟಿ ಅವರ ಪ್ರಣಾಳಿಕೆಯು ಭಾರತದಲ್ಲಿ ಇಂದು ಸಂಭವಿಸುತ್ತಿದೆ. ಅವರ ಪ್ರಕಾರ, ಯಾವಾಗ ಬಂಡವಾಳದ ಮೇಲಿನ ಪ್ರತಿಫಲದ ದರವು ಆರ್ಥಿಕ ಬೆಳವಣಿಗೆ ದರಕ್ಕಿಂತ ಅಧಿಕವಾಗಿರುತ್ತದೊ ಅಲ್ಲಿ ಅಸಮಾನತೆಯು ತೀವ್ರವಾಗುತ್ತದೆ. ಭಾರತದಲ್ಲಿ ಇಂದು ಅತಿಬಂಡವಾಳಿಗರ ಸಂಪತ್ತು ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ, ಆದರೆ ಆರ್ಥಿಕ ಬೆಳವಣಿಗೆ ದರವು ಶೇ 6- 7ರ ನಡುವೆ ಎಡತಾಕುತ್ತಿದೆ. ಇದಕ್ಕೆ ಒಕ್ಕೂಟ ಸರ್ಕಾರವು ಪಾಲಿಸುತ್ತಿರುವ ಪ್ರತಿಗಾಮಿ ಅಪ್ರತ್ಯಕ್ಷ ತೆರಿಗೆ (ಜಿಎಸ್ಟಿ) ಮತ್ತು ಕಡಿತವಾಗುತ್ತಿರುವ ಪ್ರತ್ಯಕ್ಷ ತೆರಿಗೆ (ಕಾರ್ಪೊರೇಟ್ ತೆರಿಗೆ) ನೀತಿಯು ಕಾರಣವಾಗಿದೆ. ಮುಂಬರುವ ಬಜೆಟ್ಟಿನಲ್ಲಾದರೂ ಬಡವರನ್ನು ಕಾಪಿಡುವ ರೀತಿಯಲ್ಲಿ ತೆರಿಗೆ ನೀತಿಯನ್ನು ಒಕ್ಕೂಟ ಸರ್ಕಾರ ಬದಲಾಯಿಸಬೇಕು ಎಂದು ಒತ್ತಾಯಿಸೋಣ.
–ಟಿ.ಆರ್.ಚಂದ್ರಶೇಖರ, ಬೆಂಗಳೂರು