ಕೊರೊನಾ ಸಂಕಷ್ಟದ ಈಗಿನ ಪರಿಸ್ಥಿತಿಯಲ್ಲಿ ಹಲವರು ಬದುಕಿನ ಬಗ್ಗೆಯೇ ಭರವಸೆ ಕಳೆದು ಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಕೊಟ್ಟ ಖಾತೆಯನ್ನು ನಿರ್ವಹಿಸದೆ ಇಂತಹುದೇ ಖಾತೆ ಬೇಕೆಂದು ಪಟ್ಟು ಹಿಡಿಯುವುದು ಎಷ್ಟು ಸರಿ? ಕೊಟ್ಟ ಖಾತೆ ಬೇಡವೆಂದವರ ಮಂತ್ರಿಗಿರಿ ರದ್ದುಪಡಿಸಿ ಹೊಸಬರಿಗೆ ಮಣೆ ಹಾಕಲು ಮುಖ್ಯಮಂತ್ರಿಗೆ ಇದೊಂದು ಸುವರ್ಣ ಅವಕಾಶ. ಅವರು ಈ ದಿಸೆಯಲ್ಲಿ ಕಾರ್ಯತತ್ಪರರಾದರೆ ಖಂಡಿತ ಅವರಿಗೆ ರಾಜ್ಯದ ಜನರ ಬೆಂಬಲ ಸಿಗಲಿದೆ.