ರಾಷ್ಟ್ರಪತಿಯವರ ಸುತ್ತಲೂ ಭದ್ರತಾಪಡೆ, ಪೊಲೀಸರು, ಜಿಲ್ಲಾ ಅಧಿಕಾರಿಗಳು, ಮಂತ್ರಿ ಮಹೋದಯರ ಹಿಂಡೇ ಇರುತ್ತದೆ. ಹೀಗಿದ್ದೂ ಸಲ್ಲದ ಆತಂಕ ಮತ್ತು ಭಯದ ವಾತಾವರಣವನ್ನು ಸರ್ಕಾರವೇ ಮೂಡಿಸಿದಂತೆ ಆಗುವುದಿಲ್ಲವೇ? ಇಂತಹ ಅಸಂಬದ್ಧ ನಿಯಮಗಳೇಕೆ ಇದ್ದಕ್ಕಿದ್ದಂತೆ ಉದ್ಭವಿಸುತ್ತವೆ? ಶಿಷ್ಟಾಚಾರದ ಹೆಸರಿನಲ್ಲಿ ಇಂತಹ ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸುವುದನ್ನು ಬಿಡಬೇಕು. ರಾಷ್ಟ್ರಪತಿಯವರನ್ನು ನೋಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಬೇಕು.