ಜಮ್ಮು–ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಲು ಸರ್ಕಾರ ಅನುಸರಿಸಿದ ಮಾರ್ಗವನ್ನುಡಾ. ಸಿ.ಎನ್.ರಾಮಚಂದ್ರನ್ ಟೀಕಿಸಿದ್ದಾರೆ (ವಾ.ವಾ., ಆ. 9). ಆ ಸಂದರ್ಭದಲ್ಲಿ ಅಲ್ಲಿ 144ನೇ ಸೆಕ್ಷನ್ ಜಾರಿಗೊಳಿಸಿ, ನಾಯಕರನ್ನು ಗೃಹಬಂಧನದಲ್ಲಿ ಇರಿಸದಿದ್ದರೆ ಅವರು ಗಲಭೆಗೆ ಪ್ರಚೋದನೆ ನೀಡದೆ ಸುಮ್ಮನಿರುತ್ತಿದ್ದರೇ? ರಾಜ್ಯಪಾಲರ ವರದಿಯನ್ನೇ ಕಾಶ್ಮೀರಿಗರ ಸಮ್ಮತಿಯೆಂದು ಪರಿಗಣಿಸಲಾಗಿದೆ ಎಂದಿದ್ದಾರೆ. ಆದರೆ ಸಂವಿಧಾನದಲ್ಲಿ, ವಿಶೇಷ ಸ್ಥಾನಮಾನ ರದ್ದುಗೊಳಿಸಲು ಕಾಶ್ಮೀರ ಸರ್ಕಾರದ ಸಮ್ಮತಿ ಪಡೆಯಬೇಕು ಎಂದಿದೆಯೇ ಹೊರತು ಚುನಾಯಿತ ಸರ್ಕಾರದ ಸಮ್ಮತಿ ಎಂದು ಹೇಳಿಲ್ಲ. ಹಾಗೊಂದು ವೇಳೆ ಚುನಾಯಿತ ಸರ್ಕಾರದ ಸಮ್ಮತಿ ಪಡೆಯಬೇಕೆಂದಿದ್ದಲ್ಲಿ ಅದು ಸಾಧ್ಯವಿತ್ತೇ?