ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು, ಶತಮಾನವನ್ನು ಪೂರೈಸಿ ಮುಂದುವರಿದಿರುವುದು ಹೆಮ್ಮೆಯ ವಿಚಾರ. ಇಂಥ ಸಂದರ್ಭದಲ್ಲಿ ಅಧ್ಯಕ್ಷರ ಅಧಿಕಾರಾವಧಿ ಮೂರು ವರ್ಷವೋ ಅಥವಾ ಐದು ವರ್ಷವೋ ಎನ್ನುವ ಜಿಜ್ಞಾಸೆಯನ್ನು ನ್ಯಾಯಾಲಯದ ತನಕ ತಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ.
ಪರಿಷತ್ತಿನಲ್ಲಿ ಮತ್ತೊಂದು ಮಹತ್ವದ ಬದಲಾವಣೆಯನ್ನು ಮಾಡಬೇಕು ಎಂದೆನಿಸುತ್ತದೆ. ಗೌರವ ಕಾರ್ಯದರ್ಶಿ ಮತ್ತು ಕೋಶಾಧ್ಯಕ್ಷರು ಸಹ ಚುನಾವಣೆ ಎದುರಿಸಿ, ಗೆದ್ದು ಬಂದು ಆ ಸ್ಥಾನ ಪಡೆದರೆ ಪರಿಷತ್ತಿನ ಆಡಳಿತ ಹೆಚ್ಚು ಅರ್ಥಪೂರ್ಣವಾಗುತ್ತದೆ. ಸಂಬಂಧಿಸಿದವರು ಈ ಬದಲಾವಣೆಗೆ ಮುಂದಾಗಬೇಕು.