ಕಪಿಲ್ ಸಿಬಲ್ ಅವರು ‘2014 ಮತ್ತು 2019ರಲ್ಲಿ ಚಾಂದಿನಿ ಚೌಕ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸೋತವರು, ಅವರು ನಿವೃತ್ತಿಗೆ ಅರ್ಹರು’ ಎಂದು ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಟ್ವೀಟ್ ಮಾಡಿದ್ದಾರೆ (ಪ್ರ.ವಾ., ಮೇ 26). ವಯಸ್ಸಿನಲ್ಲಿ ಹಿರಿಯರಾದ ದಿಗ್ವಿಜಯ ಸಿಂಗ್, ಪಿ.ಚಿದಂಬರಂ, ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಮತ್ತೊಬ್ಬ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ಅವರಂತೆಯೇ ಲೋಕಸಭಾ ಚುನಾವಣೆಯಲ್ಲಿ ಸೋತು ರಾಜ್ಯಸಭೆ ಪ್ರವೇಶಿಸಿದವರು.