ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರನ್ನು ಕಾಂಗ್ರೆಸ್ನ ಕೆ.ಆರ್.ರಮೇಶ್ ಕುಮಾರ್ ಅವರು ‘ತಲೆಹಿಡುಕ’ ಎಂದು ಕರೆದಿರುವುದು (ಪ್ರ.ವಾ., ಮಾರ್ಚ್ 11) ಶುದ್ಧ ತಪ್ಪು. ನೈತಿಕವಾಗಿ ಮಾತ್ರವಲ್ಲ, ತಾಂತ್ರಿಕವಾಗಿ ಕೂಡ. ಏಕೆಂದರೆ ಸುಧಾಕರ್ ತಲೆಹಿಡಿಸಿಕೊಂಡವರೇ ಹೊರತು, ತಲೆಹಿಡಿದವರಲ್ಲ. ಅವರ ತಲೆಹಿಡಿದವರು ಬೇರೆ. ಆದರೆ ಇಂದು ಈ ತಲೆಹಿಡುಕತನವು ಪ್ರಜಾಪ್ರಭುತ್ವದ ಒಂದು ಅವಿಭಾಜ್ಯ ಭಾಗವೇ ಆಗಿಹೋಗಿ, ಕರ್ನಾಟಕದಲ್ಲಿ ಇತ್ತೀಚೆಗೆ ಕಂಡಂತೆ ಜನರಿಂದ ಭಾರಿ ಚುನಾವಣಾ ಮಾನ್ಯತೆಯನ್ನೂ ಪಡೆದಿದೆ.