ಒಂದು ಕಡೆ ನೆರೆ, ಇನ್ನೊಂದು ಕಡೆ ಬರ ಎಂಬ ಸ್ಥಿತಿ ಈಗಲೂ ರಾಜ್ಯದಲ್ಲಿದೆ. ಈ ವರ್ಷ ಕೆಲವು ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾದರೆ, ತುಮಕೂರು, ಬೆಂಗಳೂರು ಮತ್ತಿತರ ಕಡೆ ಹದ ಮಳೆಯೇ ಆಗಿಲ್ಲ. ಇಂಥ ಕಡೆಗಳಲ್ಲಿ ಕುಡಿಯುವ ನೀರಿನ ಬವಣೆ ಹೇಳತೀರದು. ಇಂಥ ಸ್ಥಿತಿಯನ್ನು ನಿಭಾಯಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು.