<p>ಕೊಡವ ಯುವಕನೊಬ್ಬ ಕೊಡವ ಸಾಂಪ್ರದಾಯಿಕ ಉಡುಗೆ ಧರಿಸಿ ಅಮೆರಿಕದಲ್ಲಿ ಸಲಿಂಗ ವಿವಾಹವಾಗಿದ್ದಕ್ಕೆ ಕೊಡವ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿರುವುದನ್ನು ತಿಳಿದು (ಪ್ರ.ವಾ., ಅ. 9) ಬೇಸರವಾಯಿತು. ಇಲ್ಲಿ ಆಕ್ಷೇಪವಿರುವುದು ಸಲಿಂಗಿಗಳು ಅದನ್ನು ಧರಿಸಿದರೆಂಬ ಕಾರಣಕ್ಕೆ. ಅಂದರೆ ಅದು ಸಲಿಂಗಪ್ರೇಮ ಹಾಗೂ ಸಲಿಂಗಿಗಳ ವಿವಾಹಕ್ಕೆ ವ್ಯಕ್ತವಾದ ಆಕ್ಷೇಪವೇ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಕುರಿತು ವಿರೋಧ, ವ್ಯಂಗ್ಯ, ಕುಹಕದ ಟೀಕೆಗಳನ್ನು ನೋಡುತ್ತಿದ್ದರೆ, ಎಂತಹ ಸಮಾಜದಲ್ಲಿ ನಾವಿದ್ದೇವೆ ಎನಿಸುತ್ತದೆ.</p>.<p>ಯಾರು, ಯಾವ ಬಟ್ಟೆ ಧರಿಸುತ್ತಾರೆ ಎಂಬುದರ ಮೇಲೆ ಸಂಸ್ಕೃತಿಯ ಅಳಿವು, ಉಳಿವು ನಿರ್ಧಾರವಾಗುವುದೇ? ಅಷ್ಟಕ್ಕೂ ತಾವು ಏನನ್ನು ಧರಿಸಬೇಕು, ಯಾರನ್ನು ಪ್ರೀತಿಸಬೇಕು, ಮದುವೆಯಾಗಬೇಕು ಎಂಬುದನ್ನೆಲ್ಲ ಸ್ವತಃ ನಿರ್ಧರಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಪ್ರೇಮಿಸುವುದು, ತನಗಿಷ್ಟವಾಗಿದ್ದನ್ನು ಧರಿಸುವುದನ್ನು ಅಕ್ಷಮ್ಯ ಎಂದು ಬಿಂಬಿಸಿ, ಅಂತಹವರನ್ನು ಯಾರೂ ಕ್ಷಮಿಸಬಾರದು ಎಂಬಂತಹ ಮಾತುಗಳನ್ನಾಡುವುದು ಸರಿಯಲ್ಲ.</p>.<p><em><strong>–ಪ್ರದೀಪ ಟಿ.ಕೆ., ತಿಮ್ಮೇಗೌಡನದೊಡ್ಡಿ, ಕನಕಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೊಡವ ಯುವಕನೊಬ್ಬ ಕೊಡವ ಸಾಂಪ್ರದಾಯಿಕ ಉಡುಗೆ ಧರಿಸಿ ಅಮೆರಿಕದಲ್ಲಿ ಸಲಿಂಗ ವಿವಾಹವಾಗಿದ್ದಕ್ಕೆ ಕೊಡವ ಸಮುದಾಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿರುವುದನ್ನು ತಿಳಿದು (ಪ್ರ.ವಾ., ಅ. 9) ಬೇಸರವಾಯಿತು. ಇಲ್ಲಿ ಆಕ್ಷೇಪವಿರುವುದು ಸಲಿಂಗಿಗಳು ಅದನ್ನು ಧರಿಸಿದರೆಂಬ ಕಾರಣಕ್ಕೆ. ಅಂದರೆ ಅದು ಸಲಿಂಗಪ್ರೇಮ ಹಾಗೂ ಸಲಿಂಗಿಗಳ ವಿವಾಹಕ್ಕೆ ವ್ಯಕ್ತವಾದ ಆಕ್ಷೇಪವೇ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಈ ಕುರಿತು ವಿರೋಧ, ವ್ಯಂಗ್ಯ, ಕುಹಕದ ಟೀಕೆಗಳನ್ನು ನೋಡುತ್ತಿದ್ದರೆ, ಎಂತಹ ಸಮಾಜದಲ್ಲಿ ನಾವಿದ್ದೇವೆ ಎನಿಸುತ್ತದೆ.</p>.<p>ಯಾರು, ಯಾವ ಬಟ್ಟೆ ಧರಿಸುತ್ತಾರೆ ಎಂಬುದರ ಮೇಲೆ ಸಂಸ್ಕೃತಿಯ ಅಳಿವು, ಉಳಿವು ನಿರ್ಧಾರವಾಗುವುದೇ? ಅಷ್ಟಕ್ಕೂ ತಾವು ಏನನ್ನು ಧರಿಸಬೇಕು, ಯಾರನ್ನು ಪ್ರೀತಿಸಬೇಕು, ಮದುವೆಯಾಗಬೇಕು ಎಂಬುದನ್ನೆಲ್ಲ ಸ್ವತಃ ನಿರ್ಧರಿಸುವ ಹಕ್ಕು ಪ್ರತಿಯೊಬ್ಬರಿಗೂ ಇರುತ್ತದೆ. ಪ್ರೇಮಿಸುವುದು, ತನಗಿಷ್ಟವಾಗಿದ್ದನ್ನು ಧರಿಸುವುದನ್ನು ಅಕ್ಷಮ್ಯ ಎಂದು ಬಿಂಬಿಸಿ, ಅಂತಹವರನ್ನು ಯಾರೂ ಕ್ಷಮಿಸಬಾರದು ಎಂಬಂತಹ ಮಾತುಗಳನ್ನಾಡುವುದು ಸರಿಯಲ್ಲ.</p>.<p><em><strong>–ಪ್ರದೀಪ ಟಿ.ಕೆ., ತಿಮ್ಮೇಗೌಡನದೊಡ್ಡಿ, ಕನಕಪುರ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>