ರಾಜ್ಯ ಸರ್ಕಾರವು ಬಸ್ ಸಂಚಾರಕ್ಕೆ ಅನುಮತಿ ನೀಡಿರುವುದು ಸೂಕ್ತ ನಿರ್ಧಾರವಲ್ಲ. ಈಗಾಗಲೇ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮುಂತಾದವರು ತಮ್ಮ ತಮ್ಮ ಊರುಗಳಿಗೆ ಎದ್ದೋ ಬಿದ್ದೋ ಹೋಗಿ ಸೇರಿ, ಅಲ್ಲಿನ ಜನರಿಗೂ ಕೊರೊನಾ ಸೋಂಕು ತಗುಲಿಸಿರುವ ನಿದರ್ಶನಗಳು ಬಹಳಷ್ಟಿವೆ. ಕೊರೊನಾ ಪ್ರಕರಣಗಳು ಹೊಸದಾಗಿ ದಾಖಲಾಗುತ್ತಲೇ ಇವೆ.