ಸರ್ಕಾರ ಮತ್ತು ಸರ್ಕಾರಿ ಸ್ವಾಮ್ಯಕ್ಕೊಳಪಟ್ಟ ಸಂಸ್ಥೆಗಳು ನಡೆಸುವ ಸಭೆ, ಸಮಾರಂಭಗಳಲ್ಲಿ ಹೂಗುಚ್ಛ, ಹಾರ ತುರಾಯಿಗೆ ಬದಲು ಕನ್ನಡ ಪುಸ್ತಕಗಳನ್ನು ನೀಡಬಹುದು ಎಂಬ ಸರ್ಕಾರದ ಆದೇಶ, ಕನ್ನಡದ ಹಿತದೃಷ್ಟಿಯಿಂದ ಸ್ವಾಗತಾರ್ಹ ಕ್ರಮ ಎನ್ನುವುದನ್ನು ಒಂದು ನೆಲೆಯಿಂದ ಒಪ್ಪಿಕೊಳ್ಳಬಹುದು. ಯಾಕೆಂದರೆ ಈ ರೂಪದಲ್ಲಾದರೂ ಪುಸ್ತಕ ಕೊಳ್ಳುವ ಮತ್ತು ಓದುವ ಸಂಸ್ಕೃತಿ ದ್ವಿಗುಣಗೊಳ್ಳಬಹುದು ಎಂಬುದು ಕನ್ನಡಿಗರ ಕಲ್ಪನೆ. ಆದರೆ ಇದರಿಂದ ಹಾರ, ಹಣ್ಣಿನ ಬುಟ್ಟಿ, ಹೂಗುಚ್ಛ, ನೆನಪಿನ ಕಾಣಿಕೆ, ಮರದ ಹಾಗೂ ಇತರ ಕರಕುಶಲ ವಸ್ತುಗಳನ್ನು ತಯಾರಿಸುವ, ಅವನ್ನು ಮಾರುವವರ ಹಸಿವಿನ ನೋವನ್ನು ಬಲ್ಲವರಾರು?