ರಸ್ತೆಗಳು, ಬಸ್ ನಿಲ್ದಾಣಗಳು, ರೈಲ್ವೆ ಮತ್ತು ವಿಮಾನ ನಿಲ್ದಾಣಗಳು, ಹೊಸ ಬಡಾವಣೆಗಳಂತಹ ಸಾರ್ವಜನಿಕ ಸ್ಥಳಗಳಿಗೆ ಹೆಸರಿಡುವಾಗ ಸರ್ಕಾರ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಜಾತಿ, ಧರ್ಮ, ಪಕ್ಷ, ಪಂಗಡ, ಪಂಥ- ಇವೆಲ್ಲವುಗಳ ಆಚೆ ನಿಂತು ಸಮಾಜಮುಖಿಯಾಗಿ ಬದುಕಿದ ಸಾರ್ಥಕ ಜೀವಿಗಳು ಇಂಥ ಸ್ಥಳಗಳ ಹೆಸರಿಗೆ ಅತ್ಯಂತ ಸೂಕ್ತರು. ಶಿವಮೊಗ್ಗ ಜಿಲ್ಲೆ ಈ ಬಗೆಯ ಬಹಳಷ್ಟು ಪುಣ್ಯಜೀವಿಗಳಿಗೆ ಜನ್ಮ ನೀಡಿದೆ. ಅಂಥವರ ಹೆಸರನ್ನು ಪಟ್ಟಿ ಮಾಡಿ, ಅದನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ಬಿಟ್ಟು, ಅದರ ಆಧಾರದ ಮೇಲೆ ಅಂತಿಮ ತೀರ್ಮಾನ ಕೈಗೊಳ್ಳುವುದು ಸೂಕ್ತ.