ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡತಗಳಿಗೆ ಮೋಕ್ಷ ಸಿಗಲಿ

Last Updated 22 ನವೆಂಬರ್ 2018, 20:15 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ಮತ್ತೆ ಕಡತ ಯಜ್ಞ ಪ್ರಾರಂಭಿಸಿರುವುದು ಸ್ವಾಗತಾರ್ಹ. ಈ ತಂತ್ರಜ್ಞಾನ ಯುಗದಲ್ಲಿಯೂ ತಮ್ಮ ಕೆಲಸ–ಕಾರ್ಯಗಳಿಗಾಗಿ ಕಂಬ ಸುತ್ತುವುದು ನಾಗರಿಕರಿಗೆ ತಪ್ಪಿಲ್ಲ ಎಂಬುದು ಶೋಚನೀಯ. ಈ ಬಗೆಯ ಅಲೆದಾಟವು ಹಿರಿಯ ನಾಗರಿಕರನ್ನು ಮತ್ತಷ್ಟು ಹಣ್ಣಾಗಿಸುತ್ತದೆ. ಕಡತ ಯಜ್ಞದ ಶುಭಾರಂಭಕ್ಕೆ ಸರ್ಕಾರ ಈ ರಾಜ್ಯೋತ್ಸವ ತಿಂಗಳನ್ನು ಆಯ್ಕೆ ಮಾಡಿಕೊಂಡದ್ದು ಒಳ್ಳೆಯದೇ. ಹಿಂದೆ ಗುಂಡೂರಾವ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ಈ ಯಜ್ಞ ಶುರುವಾಗಿತ್ತು. ಭೂ ನ್ಯಾಯ ಮಂಡಳಿಗಳಲ್ಲಿ ಅನೇಕ ವರ್ಷಗಳಿಂದ ಕಡತಗಳು ಬಾಕಿ ಉಳಿದಿವೆ. ಇವೆಲ್ಲ ತ್ವರಿತವಾಗಿ ಇತ್ಯರ್ಥಗೊಳ್ಳಬೇಕು. ದಿನಗೂಲಿಗಳಿಗೆ ಸಂಬಂಧಿಸಿದವು, ಪಿಂಚಣಿ ಪ್ರಕರಣಗಳಿಗೆ ಸಂಬಂಧಿಸಿದಂಥ ಕಡತಗಳು ಕೂಡ ಇತ್ಯರ್ಥಗೊಳ್ಳದೆ ದೂಳು ತಿನ್ನುತ್ತಿವೆ. ಇಂತಹ ಕಡತಗಳಿಗೆ ಈ ಯಜ್ಞದಲ್ಲಾದರೂ ಮೋಕ್ಷ ಸಿಗಲಿ.

ಪಿ.ಆರ್. ಕಾರಜೋಳ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT