ನ್ಯಾಯಸಮ್ಮತ ಸಾಮಾಜಿಕ, ರಾಜಕೀಯ ಹೋರಾಟಗಳನ್ನು ಹುಟ್ಟುಹಾಕಿದ ಗೋಪಾಲಗೌಡರಿಂದ ಪ್ರೇರಣೆ ಪಡೆದು ಶಿವಮೊಗ್ಗ ಜಿಲ್ಲೆಯ ಹಲವಾರು ರಾಜಕೀಯ ಮುಖಂಡರು ಜಿಲ್ಲೆಯಲ್ಲಿ ಸಮಾಜವಾದ ನೆಲೆಯೂರುವಂತೆ ಮಾಡಿದ್ದು ಈಗ ಇತಿಹಾಸ. ಇಂದಿನ ವೈಷಮ್ಯದ ರಾಜಕೀಯ ವ್ಯವಸ್ಥೆಯಲ್ಲಿ ಗೋಪಾಲಗೌಡರು ನಮಗೆಆದರ್ಶಪ್ರಾಯರಾಗುತ್ತಾರೆ. ಪ್ರಾತಃಸ್ಮರಣೀಯರಾಗುತ್ತಾರೆ. ಅವರ ಜೀವನ ಮೌಲ್ಯ, ಸಿದ್ಧಾಂತ, ಕಾಲಪ್ರವಾಹದಲ್ಲಿ ಕೊಚ್ಚಿ ಹೋಗದೆ ನಾಳಿನ ಬಾಳಿಗೆ ದಾರಿದೀಪವಾಗಬೇಕು.