ವಿವಿಧ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿ.ಕೆ.ಶಿವಕುಮಾರ್ ಮುಂತಾದವರನ್ನು ವಿಚಾರಣೆಗೆ ಒಳಪಡಿಸುವ ಬಗ್ಗೆ ದೇಶದಲ್ಲಿ ಭ್ರಷ್ಟಾಚಾರ ವಿರೋಧಿಗಳ ತಕರಾರು ಖಂಡಿತಾ ಇರುವುದಿಲ್ಲ. ನಿಜವಾಗಿಯೂ ಅವರೆಲ್ಲಾ ಆಯಾ ಪ್ರಕರಣಗಳಲ್ಲಿ ತಪ್ಪಿತಸ್ಥರೇ ಆಗಿದ್ದರೆ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರ ಬಗ್ಗೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ಅದು ಒಪ್ಪುವಂಥದ್ದೂ ಅಲ್ಲ. ಆದರೆ ಪ್ರಶ್ನೆ ಇರುವುದು, ಆಡಳಿತ ಪಕ್ಷಕ್ಕೆ ಸೇರಿದ ಯಾರನ್ನೂ ಮುಟ್ಟದೆ ಬರೀ ವಿರೋಧ ಪಕ್ಷದವರನ್ನೇ ಇ.ಡಿ. ಅವರು ತಮ್ಮ ಗುರಿಯನ್ನಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವುದರ ಬಗ್ಗೆ. ಹಾಗಾದರೆ ಆಡಳಿತ ಪಕ್ಷದವರು ಇದೆಲ್ಲದರಿಂದ ಹೊರತಾದವರೇ?