ತಿ.ನರಸೀಪುರ ತಾಲ್ಲೂಕಿನಲ್ಲಿ ಬೋನಿಗೆ ಬಿದ್ದ ಚಿರತೆಯನ್ನು ಕೊಲ್ಲಲು ಸ್ಥಳೀಯರು ಪಟ್ಟು ಹಿಡಿದಿದ್ದು (ಪ್ರ.ವಾ. ಜ. 27) ಚಿಂತಿಸುವಂತಿದೆ. ಜನಸಾಮಾನ್ಯರ ಜೀವ ತೆಗೆದ ಚಿರತೆಯನ್ನು ಕೊಲ್ಲಿ ಎಂಬ ಜನರ ಆಗ್ರಹ ಒಂದು ಲೆಕ್ಕದಲ್ಲಿ ಸರಿಯಿರಬಹುದು. ಆದರೆ ಅದು ಊರೊಳಕ್ಕೆ ನುಗ್ಗಲು, ಆಹಾರ ಸಿಗದೇ ಒದ್ದಾಡಲು, ಸೂಕ್ತ ಆಶ್ರಯ ಇಲ್ಲದಿರಲು ನಮ್ಮ ದುರಾಸೆಯು ಕಾರಣ ತಾನೆ?