ವಾಚಕರ ವಾಣಿ| ಜೀವ ಅಮೂಲ್ಯ ನಿಜ, ಆದರೆ...
ತಿ.ನರಸೀಪುರ ತಾಲ್ಲೂಕಿನಲ್ಲಿ ಬೋನಿಗೆ ಬಿದ್ದ ಚಿರತೆಯನ್ನು ಕೊಲ್ಲಲು ಸ್ಥಳೀಯರು ಪಟ್ಟು ಹಿಡಿದಿದ್ದು (ಪ್ರ.ವಾ. ಜ. 27) ಚಿಂತಿಸುವಂತಿದೆ. ಜನಸಾಮಾನ್ಯರ ಜೀವ ತೆಗೆದ ಚಿರತೆಯನ್ನು ಕೊಲ್ಲಿ ಎಂಬ ಜನರ ಆಗ್ರಹ ಒಂದು ಲೆಕ್ಕದಲ್ಲಿ ಸರಿಯಿರಬಹುದು. ಆದರೆ ಅದು ಊರೊಳಕ್ಕೆ ನುಗ್ಗಲು, ಆಹಾರ ಸಿಗದೇ ಒದ್ದಾಡಲು, ಸೂಕ್ತ ಆಶ್ರಯ ಇಲ್ಲದಿರಲು ನಮ್ಮ ದುರಾಸೆಯು ಕಾರಣ ತಾನೆ?
ವನ್ಯಜೀವಿ ಅಂದರೆ ಜೀವ ತಲ್ಲಣಿಸುತ್ತದೆ. ಊರೊಳಗೆ ನುಗ್ಗಿ ಅಮಾಯಕರನ್ನು ಬಲಿ ಪಡೆದ ಆ ಜೀವಿಯನ್ನು ಮಾನವರಾದ ನಾವೂ ಕೊಲ್ಲುವುದು ತರವೇ? ಜೀವ ಕಳೆದುಕೊಂಡವರ, ಬಂಧು ಬಾಂಧವರ ಸಂಕಟ ಅಪಾರವಾದುದು. ಹಾಗೆಂದು ಮೂಕ ಜೀವಿಗಳನ್ನು ಕೊಲ್ಲಲು ನಮಗೇನು ಹಕ್ಕಿದೆ?
- ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.