ರಾಜ್ಯದಲ್ಲಿನ ಜಲಾಶಯಗಳು ಭರ್ತಿಯಾದಾಗ ಜನಪ್ರತಿನಿಧಿಗಳಿಂದ ಜಲಾಶಯಕ್ಕೆ ಪೂಜೆ ಸಲ್ಲಿಸುವುದು ಹಾಗೂ ಬಾಗಿನ ಅರ್ಪಿಸುವುದು ವಾಡಿಕೆ. ಆದರೆ ಅವರು ಬಾಗಿನ ಅರ್ಪಿಸುವ ರೀತಿ ಸರಿಯಾಗಿ ಇರುವುದಿಲ್ಲ. ಜಲಾಶಯಕ್ಕೆ ಪೂಜೆ ಸಲ್ಲಿಸಿದ ನಂತರ ಅಣೆಕಟ್ಟೆಯ ಮೇಲಿನಿಂದಲೇ ಮೊರದ ಬಾಗಿನವನ್ನು ನೀರಿಗೆ ಎಸೆಯುವುದು ಬಾಗಿನ ಅರ್ಪಣೆಯ ಪದ್ಧತಿಗೆ ಅಪಮಾನ ಮಾಡಿದಂತೆ. ಜಲಾಶಯದ ಪೂಜೆಯ ನಂತರ ನದಿಯ ತೀರಕ್ಕೆ ತೆರಳಿ, ದಡದಲ್ಲಿ ನಿಂತು ಮಾತೆಗೆ ನೀರಿನಲ್ಲಿ ಬಾಗಿನವನ್ನು ತೇಲಿಬಿಡುವುದು ಸರಿಯಾದ ಕ್ರಮ.