ಷೇಕ್ಸ್ಪಿಯರ್ನ ಅತ್ಯಂತ ಜನಪ್ರಿಯ ನಾಟಕ ‘ಜೂಲಿಯಸ್ ಸೀಜರ್’. ಸೀಜರ್ ಜನಪ್ರಿಯ ರಾಜ. ಅವನ ಹಿತಶತ್ರುಗಳು ಸಭೆಯಲ್ಲಿಯೇ ಅವನನ್ನು ಕೊಲ್ಲುತ್ತಾರೆ. ಆ ಗುಂಪಿನಲ್ಲಿ ಸೀಜರ್ನ ಪರಮಮಿತ್ರನಾಗಿದ್ದ ಬ್ರೂಟಸ್ ಕೂಡ ಒಬ್ಬ. ಸೀಜರ್ನ ಇನ್ನೊಬ್ಬ ಆಪ್ತ ಆಂಟೊನಿ ಈ ದುಷ್ಟಕೂಟದ ಕುತಂತ್ರವನ್ನು ಬಯಲು ಮಾಡಲು ನಿಶ್ಚಯಿಸಿ, ಆ ದುಷ್ಟಕೂಟವು ಸಾಮ್ರಾಜ್ಯ ಪಡೆದ ಸಂಭ್ರಮವನ್ನು ಆಚರಿಸುತ್ತಿರುವಾಗ, ಅವರನ್ನು ಹೊಗಳತೊಡಗುತ್ತಾನೆ. ಸೀಸರ್ ಹತ್ಯೆಯಾದದ್ದು ಒಳ್ಳೆಯದಾಯಿತು ಎನ್ನುವಂತಹ ಜಾಣತನದ ಮಾತನಾಡಿ, ದುಷ್ಟಕೂಟದ ಕುತಂತ್ರವನ್ನು ಬಯಲು ಮಾಡುತ್ತಾನೆ. ಕಡೆಗೆ ಜನರೇ ಆ ದುಷ್ಟಕೂಟವನ್ನು ಓಡಿಸುತ್ತಾರೆ. ಈ ಸಂದರ್ಭದಲ್ಲಿನ ಆಂಟೊನಿ ಭಾಷಣ ಜಗತ್ಪ್ರಸಿದ್ಧವಾಗಿದೆ.